ಕ್ಯಾನ್ಸರ್ ಗೆದ್ದು ತಂಡಕ್ಕೆ ಮರಳಿದ್ದ Yuvraj Singh ವೃತ್ತಿ ಜೀವನ ಅಂತ್ಯಕ್ಕೆ Virat Kolhi ಕಾರಣ’: Robin Uthappa ಸ್ಫೋಟಕ ಹೇಳಿಕೆ

ಮುಂಬೈ: ಯುವರಾಜ್ ಸಿಂಗ್ ಅವರ ಕ್ರಿಕೆಟ್‌ ಜೀವನ ಮೊಟಕುಗೊಳ್ಳಲು ವಿರಾಟ್ ಕೊಹ್ಲಿಯೇ ಕಾರಣ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಕರ್ನಾಟಕ ಮೂಲದ ರಾಬಿನ್ ಉತ್ತಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಕ್ಯಾನ್ಸರ್‌ ಗೆದ್ದು ಕ್ರಿಕೆಟ್‌ಗೆ ಮರಳಿದ ಆಲ್‌ರೌಂಡರ್‌ ಅವರ ಕ್ರಿಕೆಟ್‌ ಜೀವನ ಮೊಟಕುಗೊಳ್ಳಲು ಪರೋಕ್ಷವಾಗಿ ವಿರಾಟ್‌ ಕೊಹ್ಲಿ ಹೊಣೆಗಾರರು. ತಂಡಕ್ಕೆ ಮರಳಿ ಬಂದಾಗ ತಮಗೆ ಫಿಟ್ನೆಸ್‌ನಲ್ಲಿ ಕೆಲವು ರಿಯಾಯಿತಿ ನೀಡುವಂತೆ ಯುವಿ ಮನವಿ ಮಾಡಿದ್ದರು. ಇದಕ್ಕೆ ತಂಡದ ಆಗಿನ ನಾಯಕ ಕೊಹ್ಲಿ ಒಪ್ಪಿರಲಿಲ್ಲ. ಇದು ಅವರ ಕ್ರಿಕೆಟ್ ಜೀವನ ಬೇಗ ಅಂತ್ಯವಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.

ಲಲ್ಲನ್‌ಟಾಪ್‌ ಯು ಟ್ಯೂಬ್‌ ಚಾನೆಲ್‌ನಲ್ಲಿ ‘ಟೇಕ್‌ ಯುವಿ ಪಾ’ಸ್‌ ಇನ್‌ಸ್ಟೆನ್ಸ್‌’ ಶೀರ್ಷಿಕೆಯ ಸಂದರ್ಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಬಿನ್ ಉತ್ತಪ್ಪ, ‘ಕ್ಯಾನ್ಸರ್ ಗೆದ್ದ ಯುವರಾಜ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಯತ್ನಿಸಿದರು. ಅದರೆ ಅದಕ್ಕೆ ವಿರಾಟ್ ಕೊಹ್ಲಿ ಪರೋಕ್ಷ ತಡೆಯಾದರು ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತಪ್ಪ, ‘ಯುವರಾಜ್ ಸಿಂಗ್ ಇತರ ಆಟಗಾರರೊಂದಿಗೆ ನಮಗೆ ವಿಶ್ವಕಪ್ ಗೆಲ್ಲಿಸಿಕೊಟ್ಟವರು. ಹಾಗೆ ನೋಡಿದರೆ ಎರಡು ವಿಶ್ವಕಪ್‌ ಅವರಿದ್ದಾಗ ಭಾರತ ಗೆದ್ದಿತ್ತು . ನಿಮ್ಮ (ಯುವಿ) ಶ್ವಾಸಕೋಶದ ಸಾಮರ್ಥ್ಯ ಕ್ಷೀಣಿಸಿದೆ ಎಂದು ನೀವು ಹೇಳಿದ್ದೀರಿ. ಅವರು ಒದ್ದಾಡುತ್ತಿದ್ದಾಗ ನಾಯಕರಾಗಿ ಅದನ್ನು ನೋಡಿದವರು ನೀವು (ಕೊಹ್ಲಿ). ನೀವು ಅವರ ಪರದಾಟ ನೋಡಿದ್ದೀರಿ. ನಾಯಕರಾಗಿ ನೀವು ಒಂದು ಮಟ್ಟ ಕಾಪಾಡಿಕೊಂಡಿದ್ದು ಸರಿ. ಆದರೆ ನಿಯಮಗಳಿಗೂ ಕೆಲವೊಮ್ಮೆ ಅಪವಾದಗಳಿರುತ್ತವೆ. ಅವರಿಗೆ ಆ ರಿಯಾಯಿತಿ ಕೊಡಬಹುದಿತ್ತು. ಏಕೆಂದರೆ ಅವರು ಟೂರ್ನಿಗಳನ್ನು ಗೆಲ್ಲಿಸಿಕೊಟ್ಟವರು, ಕ್ಯಾನ್ಸರ್ ಗೆದ್ದವರು ಎಂದು ಹೇಳಿದ್ದಾರೆ.

ಇಷ್ಟಕ್ಕೂ ಕೊಹ್ಲಿ ಮಾಡಿದ್ದೇನು? ಉತ್ತಪ್ಪ ಆರೋಪವೇನು?

ಕ್ಯಾನ್ಸರ್ ಗೆದ್ದ ಯುವಿ ಮತ್ತೆ ಕ್ರಿಕೆಟ್ ಫೀಲ್ಡ್​​ನಲ್ಲಿ ಯುದ್ಧ ಆಡೋಕೆ ಸಿದ್ಧವಾಗಿದ್ರು. ಆದ್ರೆ ಯುವರಾಜ್ ಸಿಂಗ್ ಗೆ ಅವಕಾಶ ಕೊಡಲು ಯಾರೂ ಮನಸ್ಸು ಮಾಡಲಿಲ್ಲವಂತೆ. ಅಂತೆಯೇ ತಂಡಕ್ಕೆ ಆಯ್ಕೆಯಾಗಲು ಫಿಟ್ನೆಸ್ ಟೆಸ್ಟ್ ಪಾಸ್​ಆಗಲು ಯುವರಾಜ್ ಸಿಂಗ್, 2 ಪಾಯಿಂಟ್ ಕಡಿಮೆ ಮಾಡಿ ಅಂತ ಕೇಳಿಕೊಂಡ್ರು. ಆದ್ರೆ ಯುವಿ ಮನವಿಯನ್ನು ಅಂದಿನ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಆಡಳಿತ ಮಂಡಳಿ ತಿರಸ್ಕರಿಸಿತು. ಯುವಿ ತಂಡದಲ್ಲಿ ಇಲ್ಲದೇ ಇದ್ರೂ, ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ರು. ನಂತರ ತಂಡಕ್ಕೆ ಕಮ್​ಬ್ಯಾಕ್ ಮಾಡಿದ ಯುವಿ, ಉತ್ತಮ ಪ್ರದರ್ಶನ ನೀಡಲಿಲ್ಲ. ಆಗ ಯಾರೂ ಯುವಿ ಬೆನ್ನಿಗೆ ನಿಲ್ಲಲಿಲ್ಲ. ಲೀಡರ್​ಶಿಪ್ ಗ್ರೂಪ್​ನಲ್ಲಿದ್ದವರು ಯಾರೂ ಸಪೋರ್ಟ್ ಮಾಡಲಿಲ್ಲ. ಆಗ ನಾಯಕನಾಗಿದ್ದ ಕೊಹ್ಲಿ ಕೂಡ, ಯುವಿಯ ಕೈ ಬಿಟ್ರು ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

ಅಲ್ಲದೆ ಇದನ್ನು ನನಗೆ ಬೇರೆ ಯಾರೂ ಹೇಳಲಿಲ್ಲ. ಇದನ್ನು ನಾನೇ ಗಮನಿಸಿದ್ದೆ’ ಎಂದು ರಾಬಿನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು