ಮೋದಿಯವರನ್ನ ಪಿಎಂ ಸ್ಥಾನದಿಂದ ಕೆಳಗಿಳಿಸಿ ನಿತಿನ್ ಗಡ್ಕರಿಯವರನ್ನು ಮಾಡ್ರಿ; ಬಿಜೆಪಿಗರಿಗೆ ಸಂತೋಷ್ ಲಾಡ್ ಮನವಿ

ಬೆಳಗಾವಿ :ಕೆಳಗಡೆ ಇಳಿಸ್ರೀ. ಚಂದ್ರಬಾಬು ನಾಯ್ಡು ಅಥವಾ ನಿತಿನ್ ಗಡ್ಕರಿ ಪ್ರಧಾನಮಂತ್ರಿ ಆಗಲಿ ಎಂದು ಬಿಜೆಪಿ ನಾಯಕರಿಗೆ ಸಚಿವ ಸಂತೋಷ್ ಲಾಡ್ ತೀರುಗೇಟು ನೀಡಿದರು.


ಮುಂದೆ ಚಂದ್ರಬಾಬು ನಾಯ್ಡು ಪ್ರಧಾನಮಂತ್ರಿ ಆಗಬಹುದು ಇಲ್ಲವೇ ನಿತೀಶ್ ಕುಮಾರ್, ನಿತಿನ್ ಗಡ್ಕರಿ ಆಗಬಹುದು. ನನಗೆ ಇರುವಂತಹ ಮಾಹಿತಿ ಪ್ರಧಾನಮಂತ್ರಿ ಬದಲಾಗ್ತಾರೆ ಅಂತಾನೇ ಇದೆ. ನಾನು ಬಿಜೆಪಿ ನಾಯಕರು, ಕಾರ್ಯಕರ್ತರಲ್ಲಿ ಮನವಿ ಮಾಡ್ತಿನಿ. ಸ್ವಾಮಿ ಸಾಕು ಈ ಪ್ರಧಾನಮಂತ್ರಿ, ಅವರನ್ನು ಕೆಳಗಿಸಿ ಬೇರೆಯವರನ್ನ ಪ್ರಧಾನಮಂತ್ರಿ ಮಾಡ್ರೀ. ನಿತಿನ್ ಗಡ್ಕರಿ ಅವರನ್ನ ಪ್ರಧಾನಮಂತ್ರಿ ಮಾಡ್ರೀ, ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾನೇ ಬುದ್ಧಿವಂತ, ವಿಶ್ವ ಗುರು ಅಂತಾ ಬಿಜೆಪಿಯವರು ಹೇಳಿದ್ರೆ ಹೇಗೆ? ಎಂದು ಟಾಂಗ್ ನೀಡಿದರು.
ಡಿಕೆಶಿಗೆ ಎರಡು ಪದವಿ ಕೊಟ್ಟಿದ್ದಕ್ಕೆ ಸಚಿವ ರಾಜಣ್ಣ ಅಸಮಾಧಾನ ವಿಚಾರ
ಇಂತಹ ಏನೇ ಭಿನ್ನಾಭಿಪ್ರಾಯ ಬಂದಾಗ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಪಕ್ಷದಲ್ಲಿನ ಸಮಸ್ಯೆಗೆ ಹೈಕಮಾಂಡ್ ಸೂಕ್ತವಾದ ಮಾರ್ಗದರ್ಶನ, ಪರಿಹಾರ ಕಂಡು ಹಿಡಿಯುತ್ತದೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಲಹದ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ ಎಂದರು.
ಸಿಎಂ‌ ಸಿದ್ದರಾಮಯ್ಯ ಬದಲಾವಣೆ ಚರ್ಚೆ ವಿಚಾರ

ಎರಡು ವರ್ಷಗಳಿಂದ ನಾನು ಈ ಮಾತು ಕೇಳುತ್ತಿದ್ದೇನೆ. ಸರ್ಕಾರ ಬಂದ ಮೂರನೇ ತಿಂಗಳಿನಿಂದ ಈ ಮಾತು ಆರಂಭವಾಗಿದೆ. ಈಗ ಎರಡು ವರ್ಷ ಅಂತೂ ಏನು ಆಗಿಲ್ಲ ಎಂದರು.

ಬಿಸಿ ಬಿಸಿ ಸುದ್ದಿ

ಕ್ರಿಕೆಟ್ ಲೈವ್ ಸ್ಕೋರ್

ಚಿನ್ನ ಮತ್ತು ಬೆಳ್ಳಿ ಬೆಲೆಗಳು